SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಪಾಕ್​​ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ


This slideshow requires JavaScript.

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಗಾಯಕಿಗೆ ಪಾಕಿಸ್ತಾನದ ನ್ಯಾಯಾಲಯವು 2 ವರ್ಷಗಳ ಸೆರೆವಾಸದ  ಶಿಕ್ಷೆ ವಿಧಿಸಿತು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಪ್ರಧಾನಿ ಮೇಲೆ ಹಾವು ಛೂ ಬಿಡುತ್ತೇನೆ ಎಂದು ಪಾಕ್​​ ಮೂಲದ ಪಾಪ್ ಗಾಯಕಿ ರಬಿ ಪಿರ್ಜಾದಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ತನ್ನ ಕೈಯಲ್ಲೇ ದೈತ್ಯ ಹಾವುಗಳನ್ನು ಹಿಡಿದು ಮೋದಿ ಮೇಲೆ ಛೂ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೀಗ ಪಾಕಿಸ್ತಾನ ನ್ಯಾಯಲಯವೂ ಈ ಗಾಯಕಿಗೆ 2 ವರ್ಷ ಜೈಲು ಜೊತೆಗೆ ದಂಡ ವಿಧಿಸಿತು.

ಟಿವಿ ನಿರೂಪಕಿ ಹಾಗೂ ಪಾಪ್ ಗಾಯಕಿ ರಬಿ ಪಿರ್ಝಾದಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ಈಕೆ ಯುಟ್ಯೂಬ್ ಚಾನಲ್‍ನಲ್ಲಿ ಸೆಪ್ಟೆಂಬರ್ 2ರಂದು ಬಿಡುಗಡೆ ಮಾಡಿದ್ದ ವಿಡಿಯೋ ಸಾಕಷ್ಟು ಜನ ನೋಡಿದ್ದರು. ಸ್ಥಳೀಯ ಸುದ್ದಿ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿದ್ದವು.

“ಪ್ರಧಾನಿ ನರೇಂದ್ರ ಮೋದಿ 370ನೇ ವಿಧಿ ರದ್ದು ಮಾಡಿದ್ದಾರೆ. ಜಮ್ಮು-ಕಾಶ್ಮೀರಿಗಳಿಗೆ ಇವರು ಭಾರೀ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ನಾನು ಮೋದಿಯವರ ಮೇಲೆ ಹಾವು ಛೂ ಬಿಡುತ್ತೇನೆ. ಬಳಿಕ ನಾವೆಲ್ಲಾ ಹಬ್ಬ ಮಾಡಬಹುದು” ಎಂದು ದೈತ್ಯ ಹಾವುಗಳನ್ನು ವಿಡಿಯೋದಲ್ಲಿ ತೋರಿಸಿದ್ದರು ಗಾಯಕಿ.

ಗಾಯಕಿ ರಬಿ ಪಿರ್ಜಾದಾ ಇಂತಹ ವಿಲಕ್ಷಣ ವಿಡಿಯೋವನ್ನು ಚೋಟಿ ಸಿ ಬಾತ್ ಎಂಬ ಹ್ಯಾಷ್ ಟ್ಯಾಗ್​ನೊಂದಿಗೆ ತಮ್ಮ ಟ್ವಿಟರ್​ನಲ್ಲಿ ಕೂಡ ಅಪ್​ಲೋಡ್ ಮಾಡಿದ್ದರು. ಬಳಿಕ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಭಾರಿ ವೈರಲ್ ಮಾಡಿದರು. 50 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಗಾಯಕಿ ಕೈಲಿ ಹಾವನ್ನು ಹಿಡಿದು, ಕಾಶ್ಮೀರ ವಿಚಾರವಾಗಿ ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ಮೋದಿಗೆ ಹೆದರಿಸಿದ್ದರು.

ಕೈಯಲ್ಲಿ ಒಂದಿಷ್ಟು ಹಾವುಗಳನ್ನು ಹಿಡಿದು ಮೋದಿಗೆ ಬೆದರಿಕೆ ಹಾಕುವ ವೇಳೆ ರಬಿ ಪಿರ್ಜಾದಾ ಹಾಡೊಂದನ್ನು ಕೂಡ ಹಾಡಿದ್ದರು.

ಹಾವುಗಳನ್ನು ತೋರಿಸುತ್ತಾ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇದು ಉಡುಗೊರೆ. ನಿಮಗಾಗಿ ಇದನ್ನು ಸಿದ್ದಪಡಿಸಿದ್ದೇನೆ. ನರಕದಲ್ಲಿ ಸಾಯಲು ತಯಾರಾಗಿ. ನನ್ನ ಸ್ನೇಹಿತರು ಹಬ್ಬ ಆಚರಿಸಲು ಸಿದ್ದವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಪ್ ಗಾಯಕಿ ವಿಡಿಯೋ ಹಾಕಿದ್ದಳು. ಈಕೆ ಪಕ್ಕದಲ್ಲಿ ಭಾರೀ ಗಾತ್ರದ ಹೆಬ್ಬಾವುಗಳು ಹರಿದಾದುತ್ತಿದ್ದ ದೃಶ್ಯವನ್ನು ಕ್ಯಾಮರಾ ಸೆರೆ ಹಿಡಿದಿತ್ತು ಈಕೆಯ ವಿಡಿಯೋವನ್ನು ಪಾಕಿಸ್ತಾನದ ಟಿವಿ ಚಾನೆಲ್ ಕೂಡಾ ಪ್ರಸಾರಮಾಡಿತ್ತು.

ವನ್ಯಜೀವಿಗಳನ್ನು ಮನೆಯಲ್ಲಿ ಸಾಕುವುದು ಅಪರಾಧವಾಗಿದ್ದು ಸ್ಥಳೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಈಕೆಯ ವಿರುದ್ಧ ದೂರು ದಾಖಲಿಸಿತು. ದೂರಿನ ಅನ್ವಯ ಪಂಜಾಬ್ ಪ್ರಾಂತ್ಯದ ವನ್ಯಜೀವಿ ಸಂರಕ್ಷಣಾ ಇಲಾಖೆ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಯಿತು.

ಈಕೆಯ ಈ ಕೃತ್ಯಕ್ಕೆ ಸಾಮಾಜಿಕ ತಾಲತಾಣಗಳಲ್ಲಿ ಭಾರತೀಯರು ಕಿಡಿಕಾರುತ್ತಿದ್ದು, ಇದು ಪಾಕಿಸ್ತಾನಿ ಪ್ರಜೆಗಳ ಹತಾಶೆಯ ಪರಮಾವಧಿ ಎಂದು ಬಣ್ಣಿಸಿದರು.

September 15, 2019 - Posted by | ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, India, Nation, News, Pakistan, Politics, Prime Minister, Social Media, Spardha, World | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ