SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಮಲೇಶ್ ತಿವಾರಿ ಹತ್ಯೆ: ಸ್ವೀಟ್ ಬಾಕ್ಸ್‌ಗಳು, ಕೇಸರಿ ಕುರ್ತಾ ಹಂತಕರ ಜಾಡು ತೋರಿಸಿದವು!


20 kamlesh-tiwari-murder-case sweet box
ದುಬೈಯಿಂದ ೨ ತಿಂಗಳ ಹಿಂದೆ ಮರಳಿದ್ದ ಸಂಚುಕೋರ

ಅಹ್ಮದಾಬಾದ್:  ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಹಿಂದೂ ಸಂಘಟನೆಯ ನಾಯಕ ಕಮಲೇಶ್ ತಿವಾರಿ ಹತ್ಯೆಯ ಮುಖ್ಯ ಸಂಚುಕೋರರಲ್ಲಿ ಒಬ್ಬ ಎರಡು ತಿಂಗಳುಗಳ ಹಿಂದಿನವರೆಗೂ ದುಬೈಯಲ್ಲಿ ಕಂಪ್ಯೂಟರ್ ಆಪರೇಟರ್ ಅಗಿ ಕೆಲಸ ಮಾಡುತ್ತಿದ್ದ ಮತ್ತು ಕುಟುಂಬದ ವಿವಾಹ ಸಮಾರಂಭ ಒಂದಕ್ಕಾಗಿ ಗುಜರಾತಿನ ಸೂರತ್ತಿಗೆ ಹಿಂತಿರುಗಿದ್ದ. ಆತ ಮತ್ತು ಸಂಗಡಿಗರು ಖರೀದಿಸಿದ್ದ ಸಿಹಿ ತಿಂಡಿಗಳ ’ಬಾಕ್ಸ್’ ಅವರ ಬಂಧನಕ್ಕೆ ದಾರಿ ಸುಗಮಗೊಳಿಸಿತು ಎಂಬುದು ಬೆಳಕಿಗೆ ಬಂದಿತು.

೨೩ರ ಹರೆಯದ ಸೂರತ್ ನಗರದ ಲಿಂಬಾಯತ್ ಪ್ರದೇಶದ ಝಿಲ್ಲಾನಿ ಮಂಜಿಲ್ ನಿವಾಸಿ ರಶೀದ್ ಪಠಾಣ್ ಮತ್ತು ಆತನ ನೆರೆಹೊರೆ ವ್ಯಕ್ತಿ ಮೌಲಾನಾ ಸಲೀಂ ಶೇಖ್ (೨೪) ಈ ಇಬ್ಬರನ್ನೂ  2019 ಅಕ್ಟೋಬರ್ 19ರ ಶನಿವಾರ ಅಹ್ಮದಾಬಾದಿನಲ್ಲಿ ಬಂಧಿಸಲಾಗಿದ್ದು, ಅಹ್ಮದಾಬಾದಿಗೆ ಕರೆ ತರಲಾಯಿತು.

ಶೇಖ್‌ನನ್ನು ಇತರ ನಾಲ್ವರ ಜೊತೆಗೆ ಕಮಲೇಶ್ ತಿವಾರಿ ೨೦೧೫ರಲ್ಲಿ ಮಾಡಿದ್ದ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣದ ವಿಡಿಯೋ ತೋರಿಸಿ ತೀವ್ರಗಾಮಿಯನ್ನಾಗಿ ಪರಿವರ್ತನೆ ಮಾಡಲಾಗಿತ್ತು ಎಂದು ಕೊಲೆ ಪ್ರಕರಣದ ಬಗ್ಗೆ ವಿವರಗಳನ್ನು ನೀಡುತ್ತಾ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒಪಿ ಸಿಂಗ್ ತಿಳಿಸಿದರು.

ಸಿಂಗ್ ಅವರ ಪ್ರಕಾರ ರಶೀದ್ ಕೊಲೆಯ ಯೋಜನೆಯನ್ನು ರೂಪಿಸಿದ್ದರೆ, ಫೈಝಾನ್ ಸೂರತ್ ನಗರದ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಿದ್ದ.

ಇವರಿಬ್ಬರ ಬಂಧನದಿಂದ ಕೊಲೆ ಸಂಚು ಸೂರತ್ ನಗರದಲ್ಲೇ ರಶೀದ್ ದುಬೈಯಿಂದ ವಾಪಸಾದ ಬೆನ್ನಲ್ಲೇ ರೂಪುಗೊಂಡಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ಸೂರತ್ ಪೊಲೀಸ್ ಇಲಾಖೆಯ ಅಪರಾಧ ಶಾಖೆಯ ಹಿರಿಯ ಅಧಿಕಾರಿ ನುಡಿದರು.

ಹಿಂದೂ ಸಮಾಜ ಪಾರ್ಟಿಯ ಸ್ಥಾಪಕ ತಿವಾರಿಯನ್ನು ಅವರ ಲಕ್ನೋದ ಖುರ್ಷೀದ್ ಬಾಗ್ ಪ್ರದೇಶದ ಮನೆಯೊಳಗೆ ಹತ್ಯೆಗೈದ ರಶೀದ್ ಸಹೋದರ ಪಠಾಣ್ ಮೊಯಿನುದ್ದೀನ್ ಅಹ್ಮದ್ ಮತ್ತು ಶೇಖ್ ಅಶ್ಫಾಖ್ ಹುಸೈನ್ ಅವರನ್ನು ಇನ್ನೂ ಬಂಧಿಸಬೇಕಾಗಿದೆ.

ಶುಕ್ರವಾರ ರಾತ್ರಿ ೧ ಗಂಟೆಗೆ ಕಮಲೇಶ್ ತಿವಾರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಸೂರತ್ ಅಪರಾಧ ಶಾಖೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನೆ ನಿಗ್ರಹ ದಳವು ೭ ಮಂದಿಯನ್ನು ವಶಕ್ಕೆ ಪಡೆದಿದ್ದವು.

‘ಏಳು ಮಂದಿಯನ್ನು ಶುಕ್ರವಾರ ತಡರಾತ್ರಿಯಲ್ಲಿ ಸೂರತ್ ನಗರದಲ್ಲಿ ನಡೆದ ಕಾರ್‍ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಯಿತು. ಅವರನ್ನು ತನಿಖೆಗೆ ಗುರಿಪಡಿಸಿದ ಬಳಿಕ ಅವರ ಪೈಕಿ ಮೂವರನ್ನು ಶನಿವಾರ ಬಂಧಿಸಿ ಅಹ್ಮದಾಬಾದಿಗೆ ಕರೆದೊಯ್ಯಲಾಯಿತು’ ಎಂದು ಹಿರಿಯ ಅಧಿಕಾರಿ ನುಡಿದರು.

ಸೂರತ್ ನಗರದ ಅಂಗಡಿಯೊಂದರ ಸಿಹಿ ತಿಂಡಿಯ ಪೊಟ್ಟಣಗಳು ಲಕ್ನೋದಲ್ಲಿ ಅಪರಾಧ ಘಟಿಸಿದ ಸ್ಥಳದಲ್ಲಿ ಕಂಡು ಬಂದದ್ದು ಪೊಲೀಸರ ತನಿಖೆಯನ್ನು ಚುರುಕುಗೊಳಿಸಿತ್ತು. ಕೇಸರಿ ಕುರ್ತಾ ಧರಿಸಿದ್ದ ಇಬ್ಬರು ಹಂತಕರು ಸಿಹಿ ತಿಂಡಿಯ ಪೊಟ್ಟಣ ಒಯ್ಯುವುದು ತಿವಾರಿ ಮನೆಯ ಹೊರಗೆ ಇರಿಸಲಾಗಿದ್ದ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿತ್ತು.

ನಾಡ ನಿರ್ಮಿತ ಗನ್ ಮತ್ತು ಚೂರಿ ಸೇರಿದಂತೆ ಶಸ್ತ್ರಗಳನ್ನು ಒಯ್ಯಲು ಸಿಹಿ ತಿಂಡಿಯ ಪೊಟ್ಟಣಗಳನ್ನು ಬಳಸಲಾಗಿತ್ತು. ಈ ಪೊಟ್ಟಣಗಳು ಸೂರತ್ ನಗರದ ಉಧ್ನಾ ಪ್ರದೇಶದ ಧರ್ತಿ ಫರ್‍ಸಾನ್ ಅಂಗಡಿಯಿಂದ ತಂದ ಪೊಟ್ಟಣಗಳಾಗಿದ್ದವು.

‘ಮೂರೂ ಮಂದಿ ಸಿಹಿ ಖರೀದಿಸಲು ಬಂದಿದ್ದರು ಮತ್ತು ಸಿಹಿ ತಿಂಡಿಯ ಪೊಟ್ಟಣಗಳನ್ನು ಬಳಿಕ ಶಸ್ತ್ರಾಸ್ರ್ರಗಳನ್ನು ಅಡಗಿಸಿ ಇಟ್ಟುಕೊಳ್ಳಲು ಬಳಸಿದ್ದರು ಎಂಬುದನ್ನು ಸಿಸಿಟಿವಿ ವಿಡಿಯೋ ದೃಶ್ಯಾವಳಿ ಖಚಿತ ಪಡಿಸಿತು. ನಮಗೆ ಬಿಲ್ ಪ್ರತಿ ಕೂಡಾ ಲಭಿಸಿದೆ’ ಎಂದು ಸೂರತ್ ನಗರದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಿರಿಯ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಅಪರಾಧ) ದಿನೇಶ್ ಪುರಿ ಅವರು ಸೂರತ್ ನಗರದಲ್ಲಿ ಬಂಧಿಸಲಾದ ಮೂವರು ಸಂಚುಕೋರರನ್ನು ವಶಕ್ಕೆ ಪಡೆಯಲು ತೆರಳಿದ್ದಾರೆ ಎಂದು ಲಕ್ನೋದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ ಎಸ್ ಪಿ) ಕಲೈನಿಧಿ ನೈಥಾನಿ ನುಡಿದರು.

ಸ್ಥಳೀಯ  ನ್ಯಾಯಾಲಯದಲ್ಲಿ ಟ್ರಾನ್ಸಿಟ್ ರಿಮಾಂಡ್ ಆದೇಶ ಪಡೆದ ಬಳಿಕ ಅವರನ್ನು ಲಕ್ನೋಗೆ ಕರೆತರಲಾಗುವುದು.

ಸೂರತ್ ನಗರದಲ್ಲಿ ಶೇಖ್ ಅಶ್ಫಾಖ್ ಹುಸೈನ್ ಮತ್ತು ಪಠಾಣ್ ಮೊಯಿನುದ್ದೀನ್ ಅಹ್ಮದ್ ಧರಿಸಿದ್ದ ರಕ್ತಸಿಕ್ತ ಕುರ್ತಾಗಳು ಕೂಡಾ ಲಭಿಸಿವೆ ಎಂದು ಲಕ್ನೋದಲ್ಲಿ ಪೊಲೀಸರು ಭಾನುವಾರ ತಿಳಿಸಿದರು.

ಲಕ್ನೋದ ಲಾಲ್ ಬಾಗ್ ಪ್ರದೇಶದಲ್ಲಿನ ಖಾಲ್ಸಾ ಇನ್ ಹೋಟೆಲ್‌ನಲ್ಲಿ ಶೋಧದ ಬಳಿಕ ಕೇಸರಿ ಬಣ್ಣದ ಕುರ್ತಾಗಳು, ಒಂದು ಬ್ಯಾಗ್, ಟವೆಲ್‌ಗಳು ಮತ್ತು ಇತರ ವಸ್ತುಗಳು ಲಭಿಸಿವೆ ಎಂದು ಅಧಿಕಾರಿಗಳು ನುಡಿದರು.

ಬಂಧಿತರ ಕುಟುಂಬದ ಬೇರುಗಳು ಉತ್ತರ ಪ್ರದೇಶದಲ್ಲಿ ಇದ್ದರೂ, ಅವರು ಎರಡು ದಶಕಗಳಿಂತಲೂ ಹೆಚ್ಚು ಕಾಲದಿಂದ ಸೂರತ್ ನಗರದಲ್ಲಿ ವಾಸವಾಗಿದ್ದರು.

October 20, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ