ಮಹಾಭಾರತದ ‘ದ್ರೌಪದಿ’ ಆಗಲಿದ್ದಾರೆ ದೀಪಿಕಾ ಪಡುಕೋಣೆ..!
ಇದು ದ್ರೌಪದಿ ದೃಷ್ಟಿಕೋನದ ‘ಮಹಾಭಾರತ’
ಮುಂಬೈ: ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ ನಿರ್ಮಾಣವಾಗಲಿದ್ದು, ನಟಿ ದೀಪಿಕಾ ಪಡುಕೋಣೆ ಕೇಂದ್ರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ನಿರ್ಮಾಪಕ ಮಧು ಮಂತೇನಾ ಅವರೊಂದಿಗೆ ಕೈಜೋಡಿಸಿದ್ದಾರೆ ಮತ್ತು ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ.
ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನದಿಂದ ಪ್ರೇರಿತವಾದ “ಛಪಾಕ್” ಚಿತ್ರದೊಂದಿಗೆ ದೀಪಿಕಾ ನಿರ್ಮಾಪಕರಾಗಿದ್ದಾರೆ. ಅವರ ಎರಡನೆಯ ನಿರ್ಮಾಣವಾದ “ಮಹಾಭಾರತ” ದ್ರೌಪದಿಯ ಕಣ್ಣುಗಳ ಮೂಲಕ ಕಾಣಿಸಲಿದ್ದು, ಇದು ಪೌರಾಣಿಕ ಕಥೆಯನ್ನು ಹೊಸದಾಗಿ ತೆರೆಯಲಿದೆ.
“ದ್ರೌಪದಿಯ ಪಾತ್ರವನ್ನು ವಹಿಸುವುದಕ್ಕಾಗಿ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಗೌರವಿಸಲ್ಪಟ್ಟಿದ್ದೇನೆ. ನಿಜವಾಗಿಯೂ ಇದು ಜೀವಮಾನದ ಪಾತ್ರ ಎಂದು ನಾನು ನಂಬುತ್ತೇನೆ. ‘ಮಹಾಭಾರತ’ ಪೌರಾಣಿಕ ಕಥೆಗಳು ಮತ್ತು ಸಾಂಸ್ಕೃತಿಕ ಪ್ರಭಾವದ ಹಿನ್ನೆಲೆಯಲ್ಲಿ ಜನಪ್ರಿಯವಾಗಿದೆ, ಜೀವನದ ಅನೇಕ ಪಾಠಗಳು ಸಹ ‘ಮಹಾಭಾರತ’ದಿಂದ ಹುಟ್ಟಿಕೊಂಡಿವೆ, ಆದರೆ ಅವೆಲ್ಲವೂ ಹೆಚ್ಚಾಗಿ ಅದರ ಪುರುಷರಿಂದ ಹುಟ್ಟಿಕೊಂಡವುಗಳು. ಈ ಪಾತ್ರವನ್ನು ಹೊಸ ದೃಷ್ಟಿಕೋನದಿಂದ ಹೇಳುವುದು ಆಸಕ್ತಿದಾಯಕವಷ್ಟೇ ಅಲ್ಲ ಮಹತ್ವ ಪೂರ್ಣ ಕೂಡಾ”ಎಂದು ದೀಪಿಕಾ ಹೇಳಿದ್ದಾರೆ.
‘ಮಹಾಭಾರತ’ವನ್ನು ಸರಣಿಗಳಾಗಿ ನಿರ್ಮಿಸಲಾಗುವುದು. ಮೊದಲನೆಯದು 2021ರ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ.
‘ಮಹಾಭಾರತ ನಮಗೆಲ್ಲರಿಗೂ ಗೊತ್ತು. ಆದರೆ ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ನಾಯಕಿಯರಲ್ಲಿ ಒಬ್ಬರಾದ ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ವನ್ನು ನಿರೂಪಿಸುವುದು ನಮ್ಮ ಚಿತ್ರದ ಅನನ್ಯತೆಯಾಗಿದೆ’ ಎಂದು ಮಾಂಟೆನಾ ಹೇಳುತ್ತಾರೆ.
‘ಜೊತೆಗೆ ದೀಪಿಕಾ ಅವರು ಇಂದು ಅತಿದೊಡ್ಡ ಭಾರತೀಯ ನಟಿ ಮಾತ್ರವಲ್ಲ, ಆದರೆ ಈ ನಿರೂಪಣೆಯನ್ನು ಗಡಿಯಾಚೆಗೂ ಒಯ್ಯಬಲ್ಲವರು. ಅವರು ಅಲ್ಲದೇ ಇದ್ದಿದ್ದರೆ, ನಾವು ಈ ಚಿತ್ರವನ್ನು ಅಂತಹ ಮಹತ್ವಾಕಾಂಕ್ಷೆಯ ಪ್ರಮಾಣದಲ್ಲಿ ನಿರ್ಮಿಸುತ್ತಿರಲಿಲ್ಲ’ ಎಂದೂ ಮಾಂಟೆನಾ ಹೇಳಿದರು.
No comments yet.
Leave a comment