SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪೆಹ್ಲುಖಾನ್ ವಿರುದ್ಧದ ಪ್ರಕರಣ ರದ್ದು ಪಡಿಸಿದ ರಾಜಸ್ಥಾನ ಹೈಕೋರ್ಟ್


30 court order
ಹತ್ಯೆಗಾಗಿ ಜಾನುವಾರು ಕಳ್ಳಸಾಗಣೆ ಆರೋಪದ ಪ್ರಕರಣ

ಜೈಪುರ: ೨೦೧೭ರಲ್ಲಿ ಹತ್ಯೆಯ ಸಲುವಾಗಿ ಗೋವುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಗುಂಪು ಹಲ್ಲೆಗೆ ಗುರಿಯಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದ ಪೆಹ್ಲುಖಾನ್, ಅವರ ಇಬ್ಬರು ಪುತ್ರರು ಮತ್ತು ಟ್ರಕ್ ಚಾಲಕನ ವಿರುದ್ಧ ದಾಖಲಿಸಲಾಗಿದ್ದ ಜಾನುವಾರು ಕಳ್ಳಸಾಗಣೆ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್  2019 ಅಕ್ಟೋಬರ್ 30ರ  ಬುಧವಾರ ರದ್ದು ಪಡಿಸಿತು.

ನ್ಯಾಯಮೂರ್ತಿ ಪಂಕಜ್ ಭಂಡಾರಿ ಅವರ ಏಕಸದಸ್ಯ ಪೀಠವು ಹತ್ಯೆಯ ಸಲುವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ಹೇಳಿ ರಾಜಸ್ಥಾನ ಗೋಜಾತಿಯ ಪ್ರಾಣಿಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ನಾಲ್ವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿತು.

ಟ್ರಕ್ ಚಾಲಕ ಖಾನ್ ಮೊಹಮ್ಮದ್ ಮತ್ತು ಪೆಹ್ಲುಖಾನ್ ಅವರ ಇಬ್ಬರು ಪುತ್ರರು ರಾಜಸ್ಥಾನ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಗೋವುಗಳನ್ನು ಅಕ್ರಮ ಉದ್ದೇಶಗಳಿಗಾಗಿ ಸಾಗಿಸಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲವಾದ್ದರಿಂದ ಈ ಕ್ರಿಮಿನಲ್ ಪ್ರಕರಣವು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಆರೋಪಿಗಳ ಪರವಾಗಿ ಹಾಜರಾಗಿದ್ದ ವಕೀಲ ಕಪಿಲ್ ಗುಪ್ತ ಅವರು ವಾದಿಸಿದ್ದರು.

ಅವರು ಒಯ್ಯುತ್ತಿದ್ದ ಹಸುಗಳು ಹಾಲು ನೀಡುತ್ತಿದ್ದ ಹಸುಗಳು ಮತ್ತು ಅವುಗಳ ಕರುಗಳು ಕೇವಲ ಒಂದು ತಿಂಗಳು ಪ್ರಾಯದ ಕರುಗಳಾಗಿದ್ದವು ಎಂಬುದನ್ನು ವೈದ್ಯಕೀಯ ತಜ್ಞರ ವರದಿಗಳು ಸಾಬೀತು ಪಡಿಸಿವೆ ಎಂದೂ ಗುಪ್ತ ವಾದಿಸಿದ್ದರು.

ಸ್ಥಳೀಯ ಜಾನುವಾರು ಮಾರುಕಟ್ಟೆಯಿಂದ ಹಸುಗಳನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದ ರಸೀತಿಗಳು ಇದ್ದು, ಇವುಗಳು ಅವರು ಪಶುಸಂಗೋಪನೆ ಸಲುವಾಗಿ ಜಾನುವಾರುಗಳನ್ನು ಖರೀದಿಸಿದ್ದರು ಎಂಬ ವಾಸ್ತವಾಂಶವನ್ನು ಸಾಬೀತು ಪಡಿಸಿವೆ ಎಂದು ವಕೀಲರು ಪ್ರತಿಪಾದಿಸಿದ್ದರು.

ತೀರ್ಪಿನ ಬಳಿಕ ದೂರವಾಣಿ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ ಪೆಹ್ಲು ಖಾನ್ ಅವರ ಪುತ್ರ ಇರ್ಷಾದ್ ಅವರು ’ನನ್ನ ಹಾಗೂ ನನ್ನ ಸಹೋದರನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿ ಹೈಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆ ಅತ್ಯಂತ ಸಂತಸವಾಗಿದೆ. ನಾವು ದನಗಳನ್ನು ಕೊಲ್ಲುವ ಸಲುವಾಗಿ ಒಯ್ಯುತ್ತಿರಲಿಲ್ಲ, ಆದರೆ ನಮ್ಮ ಮೇಲೆ ಹಲ್ಲೆ ನಡೆಯಿತು. ಈದಿನ ನಮಗೆ ನ್ಯಾಯ ಲಭಿಸಿದೆ’ ಎಂದು ಹೇಳಿದರು.

೫೫ರ ಹರೆಯದ ಪೆಹ್ಲುಖಾನ್ ಮತ್ತು ಅವರ ಇಬ್ಬರು ಪುತ್ರರು ಹಾಗೂ ಇತರ ಕೆಲವು ೨೦೧೭ರ ಏಪ್ರಿಲ್ ೧ರಂದು ದನಗಳನ್ನು ಸಾಗಿಸುತ್ತಿದ್ದಾಗ ಆಳ್ವಾರ್ ಜಿಲ್ಲೆಯ ಬಹ್ರೋರಿನಲ್ಲಿ ತಡೆದಿದ್ದ ಗುಂಪು ತೀವ್ರ ಹಲ್ಲೆ ನಡೆಸಿತ್ತು ಎಂದು ಆಪಾದಿಸಲಾಗಿತ್ತು.

ಗೋರಕ್ಷಕರೆಂದು ಹೇಳಿಕೊಂಡ ಗುಂಪಿನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲುಖಾನ್ ಏಪ್ರಿಲ್ ೩ರಂದು ತೀವ್ರಗಾಯಗಳ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

October 30, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ